ಒಮ್ಮೆ TVವರದಿಗಾರನೊಬ್ಬ ರೈತನ Live ಸಂದರ್ಶನ ಮಾಡುತ್ತಿದ್ದ.
ವರದಿಗಾರ: ನಿವು ಕುರಿಗೆ ಯೇನು ತಿನ್ನಿಸ್ತೀರಿ?
ರೈತ: ಬಿಳಿಕುರಿಗೋ? ಕರೆ ಕುರಿಗೋ?
ವರದಿಗಾರ: ಬಿಳಿ.
ರೈತ: ಹುಲ್ಲು....
ವರದಿಗಾರ: ಮತ್ತೆ ಕರೇದಕ್ಕೆ?
ರೈತ: ಅದಕ್ಕೂ ಹುಲ್ಲು...
ವರದಿಗಾರ: ನೀವು ಈ ಕುರಿಗಳನ್ನಾ ಯೆಲ್ಲಿ ಕಟ್ತೀರಿ?
ರೈತ: ಕರೇದನ್ನೋ? ಬಿಳೇದನ್ನೋ?
ವರದಿಗಾರ: ಬಿಳೇದು...
ರೈತ: ಹೊರಗಿನ ಕೋಣೆಯಲ್ಲಿ..
ವರದಿಗಾರ: ಕರೇದನ್ನಾ..?
ರೈತ: ಅದನ್ನೂ ಹೊರಗಿನ ಕೋಣೆಯಲ್ಲಿಯೇ...
ವರದಿಗಾರ: ಮತ್ತೆ ಅವುಗಳಿಗೆ ಸ್ನಾನಾ ಮಾಡ್ಸೋದು ಹೇಗೆ?
ರೈತ: ಕರೇದಕ್ಕೋ? ಬಿಳೇದಕ್ಕೋ...?
ವರದಿಗಾರ: ಬಿಳೇದಕ್ಕೆ...
ರೈತ: ನೀರಿನಿಂದ...
ವರದಿಗಾರ: ಕರೇದಕ್ಕೆ...?
ರೈತ: ಅದಕ್ಕೂ ನೀರಿಂದಲೇ...
ವರದಿಗಾರನಿಗೆ ಕೋಪ ನೆತ್ತಿಗೇರಿತು, ಕಿರುಚವಂತೇ ಹೇಳಿದ: ಮೂರ್ಖ! ಯೆರಡಕ್ಕೂ ವಂದೇರೀತಿ ಮಾಡೋದು ಅಂದ್ಮೇಲೆ ಪದೇ ಪದೇ ಕರೇದೊ ಬಿಳೇದೋ ಅಂತಾ ಯಾಕಯ್ಯಾ ಕೇಳ್ತಿದ್ದೆ?😡😡
ರೈತ: ಯಾಕಂದ್ರೆ... ಕಪ್ಪು ಕುರಿ ನಂದು....
ವರದಿಗಾರ: ಮತ್ತೆ ಬಿಳೇದು...?
ರೈತ: ಅದೂ...ನಂದೇ!...😜😜
ವರದಿಗಾರ ಮೂರ್ಛೆಹೋದ!!!
😩😫😩😫😩😫😩
ಪ್ರಜ್ಞೆ ಬಂದಮೇಲೆ ರೈತ ಹೇಳಿದ, ಈಗ ಗೂತ್ತಾಯ್ತಾ? TVಲಿ ನೀವು ಅದೇ ಅದೇ ಸಮಾಚಾರಾನಾ ಮತ್ತೆ ಮತ್ತೆ ತಿರ್ಗಾ ಮುರ್ಗಾ ತೋರ್ಸೀ ತೋರ್ಸೀ ನಮ್ತಲೇ ತಿಂತೀರಲ್ಲಾ ಆವಾಗಾ ನಮ್ಗೂ ಹೀಗೇ ಬೇಜಾರಾಗತ್ತೆ...!
No comments:
Post a Comment