Sunday 9 August 2015

Know Hinduism

.....ಪಂಚಾಮೃತ...........
ಹಾಲು, ಮೊಸರು, ತುಪ್ಪ , ಜೇನುತುಪ್ಪ, ಸಕ್ಕರೆ, ಬಾಳೆಹಣ್ಣು, ಎಳನೀರು, ನೀರು ಮುಂತಾದ ವಸ್ತುಗಳಿಂದ ದೇವರ ವಿಗ್ರಹಕ್ಕೆ ಅಭಿಷೇಕವನ್ನು ಮಾಡುತ್ತೇವೆ, ತದನಂತರ ತೀರ್ಥವೆಂದು ಸೇವಿಸುತ್ತೇವೆ.
ಇದಕ್ಕೆ ಪಂಚಾಮೃತವೆಂದೂ ಕರೆಯುತ್ತಾರೆ.

ಅಭಿಷೇಕವನ್ನು ಸಾಮಾನ್ಯವಾಗಿ ಸಾಲಿಗ್ರಾಮ ಶಿವಲಿಂಗ ಅಥವಾ ಕಂಚು, ತಾಮ್ರ, ಕಬ್ಬಿಣ, ಚಿನ್ನ ಮುಂತಾದ ಪಂಚಲೋಹಗಳಿಂದ ಮಾಡಿದ ವಿಗ್ರಹಗಳ ಮೇಲೆ ಮಾಡುತ್ತಾರೆ.

ಬಾಳೆಹಣ್ಣು ಹಾಗೂ ಎಳನೀರಿನಲ್ಲಿ ಇರುವ ಪೊಟ್ಯಾಶಿಯಂ ಹೃದಯ ಸಂಬಂಧಿ ಖಾಯಿಲೆಗಳು ಬರದಂತೇ ತಡೆಯುತ್ತದೆ.

ಇವುಗಳಲ್ಲಿರುವ ಔಷಧೀಯ ಗುಣಗಳು ನೀರಿನೊಂದಿಗೆ ಸೇರುತ್ತವೆ.

ಶುದ್ಧ ಸಾಲಿಗ್ರಾಮ ಹಾಗೂ ಶಿವಲಿಂಗಗಳು ಸಿಗುವುದು ಗಂಡಕಿ ಹಾಗೂ ನರ್ಮದಾ ನದಿಗಳಲ್ಲಿ.

ಈ ನದಿಗಳ ನೀರಿನಲ್ಲಿ ಸಿಲಿಕಾ ಹಾಗೂ ಕ್ಯಾಲ್ಸಿಯಂ ಅಂಶಗಳು ಜಾಸ್ತಿಯಾಗಿವೆ.

ಸಾಲಿಗ್ರಾಮ, ಶಿವಲಿಂಗಗಳ ಅಭಿಷೇಕದ ನೀರೂ ಸಹ ಈ ಅಂಶಗಳನ್ನು ಒಳಗೊಂಡಿರುತ್ತದೆ.

ಇದು ದೃಷ್ಟಿ ಸಂಬಂಧಿ ನರಗಳ ಬಲವನ್ನು ಹೆಚ್ಚಿಸುತ್ತದೆಂದು ಸಾಬೀತಾಗಿದೆ.

ಇದೇ ಕಾರಣದಿಂದ ಅಭಿಷೇಕವಾದ ನಂತರ ಸಾಲಿಗ್ರಾಮ ಅಥವಾ ಶಿವಲಿಂಗವನ್ನು ಕಣ್ಣುಗಳಿಗೆ ತಾಗಿಸಿ ನಮಸ್ಕರಿಸುತ್ತೇವೆ.

ಇನ್ನು, ಪಂಚಲೋಹಗಳಿಗಂತೂ ನಮ್ಮ ಪೂರ್ವಜರು ಬಹಳ ಮಹತ್ವ ನೀಡಿದ್ದರು.

ಬೆಳ್ಳಿಯ ತಟ್ಟೆಗಳಲ್ಲಿ ಆಹಾರವನ್ನು ಸೇವಿಸುತ್ತಿದ್ದರು.

ತಾಮ್ರದ ಪಾತ್ರೆಗಳಲ್ಲಿ ನೀರನ್ನು ಸಂಗ್ರಹಿಸಿ ಕುಡಿಯುತ್ತಿದ್ದರು.

ಲೋಹಗಳಲ್ಲಿ ವಿಶೇಷವಾದ ಶಕ್ತಿಯೆದೆಯೆಂದು ತಿಳಿದಿದ್ದರು.

ಅವುಗಳ ಮೂಲಕ ಆಹಾರವನ್ನು ಸೇವಿಸುವುದರಿಂದ ಆರೋಗ್ಯ ಚೆನ್ನಾಗಿರುತ್ತದೆಂದು ಅವರು ಅರಿತಿದ್ದರು..

ॐ ಹರ ಹರ ಮಹಾದೇವಾ ॐ 
ॐ ಹಿ೦ದುತ್ವದ ವಿಚಾರಧಾರೆ ॐ

No comments:

Post a Comment